ಕಾವ್ಯವಾಚನ,ವಿಶೇಷ ವ್ಯಾಖ್ಯಾನ ಮತ್ತು ಕನ್ನಡ ಅಷ್ಟಾವಧಾನ ಕಾರ್ಯಕ್ರಮ

"ಆಭಿರುಚಿ" ಸಂಸ್ಥೆಯು ತನ್ನ ಏಳನೇ ವಾರ್ಷಿಕೋತ್ಸವದ ಅಂಗವಾಗಿ ಕಾವ್ಯವಾಚನ,ವಿಶೇಷ ವ್ಯಾಖ್ಯಾನ  ಕಾರ್ಯಕ್ರಮಗಳನ್ನು ನವೆಂಬರ್ 12,13  2010 ರಂದು ಸುವರ್ಣ ಸಂಸ್ಕೃತಿ ಭವನದಲ್ಲಿ ಹಮ್ಮಿಕೊಂಡಿತ್ತು.

"ಕುಮಾರವ್ಯಾಸನು ರೂಪಿಸಿದ ದ್ರೌಪದಿ"ಯ ಪಾತ್ರ ಕುರಿತು
ವಿಶೇಷ ವ್ಯಾಖ್ಯಾನ ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕಾವ್ಯವಾಚನ - ಶ್ರೀ ಹೆಚ್. ಚಂದ್ರಶೇಖರ ಕೆದ್ಲಾಯ, ಬ್ರಹ್ಮಾವರ

ಮತ್ತು

ಶತಾವಧಾನಿ ಡಾ.ಆರ್ .ಗಣೇಶ್ ಅವರಿಂದ
ಕನ್ನಡ ಅಷ್ಟಾವಧಾನ ಕಾರ್ಯಕ್ರಮವನ್ನು ನವೆಂಬರ್ 14 ,2010 ರಂದು ಏರ್ಪಡಿಸಿತ್ತು.

ಈ ಮೂರು ದಿನಗಳ ಕಾರ್ಯಕ್ರಮಗಳು ಶಿವಮೊಗ್ಗದ ಜನತೆಯ ಮನದಲ್ಲಿ ಉಳಿಯುವಂತಹವಾಗಿದ್ದುವು. ಶ್ರೀ ಗಣೇಶ್ ಅವರ ವ್ಯಾಖ್ಯಾನ ಮತ್ತು ಅಷ್ಟಾವಧಾನ ಕಾರ್ಯಕ್ರಮ ಮತ್ತು ಶ್ರೀ ಕೆದ್ಲಾಯ ಅವರ ಕಾವ್ಯವಾಚನದ ಸವಿ ನೆನಪಿನೊಂದಿಗೆ, ಆ ಕಾರ್ಯಕ್ರಮದ ಕೆಲವು ಛಾಯಾ ಚಿತ್ರಗಳು ನಿಮಗಾಗಿ......!!





No comments:

Post a Comment